C¥ÀgÁzsÀUÀ¼À ¸ÀÄ¢Ý
f¯Áè ¥Éưøï PÁAiÀiÁð®AiÀÄ
ºÁªÉÃj.
¢£ÁAPÀ:30-12-2016.
ಮಾರಣಾಂತಿಕ ಅಪಘಾತಃ- ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ
ವ್ಯಾಪ್ತಿಯ ಕಲ್ಲಾಪುರ ಗ್ರಾಮದ ಚನ್ನಬಸಪ್ಪ ಕೋಡೆಪ್ಪ ಹೊಸಳ್ಳಿ ಈತನು ದಿನಾಂಕ; 29-12-2016 ರಂದು ಮದ್ಯಾಹ್ನ 3:15 ಗಂಟೆಯ ಸುಮಾರಕ್ಕೆ ತನ್ನ ಮೊಟಾರ ಸೈಕಲ್ಲ ನಂ: ಕೆಎ-27/ಯು-8421 ನೇದ್ದರ ಹಿಂದಿನ ಸೀಟಿನಲ್ಲಿ ತನ್ನ ಹೆಂಡತಿ ಸಾವಿತ್ರವ್ವಳನ್ನು ಕೂಡ್ರಿಸಿಕೊಂಡು ಹಾವೇರಿ ಕಡೆಯಿಂದ ಕನಕಾಪುರ ಕಡೆಗೆ ಅತೀವೇಗವಾಗಿ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ನಡೆಯಿಸಿಕೊಂಡು ಹೊಗಿ ಕನಕಾಪುರ ಗ್ರಾಮದ ಹದ್ದಿ ಶಿವಣ್ಣ ಮಾಸೂರ ಅಂಬುವವರ ಜಮೀನದ ಹತ್ತಿರ ರಸ್ತೆಯ ಮೇಲೆ ಕನಕಾಪುರ ಕಡೆಯಿಂದ ಹಾವೇರಿ ಕಡೆಗೆ ಬರುತ್ತಿದ್ದ ಮಹಿಂದ್ರಾ ಟಿಂಪೊ ನಂ; ಕೆಎ-20/9509 ನೇದ್ದರ ಎಡಬದಿ ಮೂಲೆಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನಗೆ ತಲೆಗೆ ಮೈಕೈ ಕಾಲುಗಳಿಗೆ ಭಾರಿ ಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಅಲ್ಲದೆ ತನ್ನ ಹೆಂಡತಿ ಸಾವಿತ್ರವ್ವಳಿಗೂ ಮೈಕೈಕಾಲುಗಳಿಗೆ ಸಾದಾ ವ ಭಾರಿ ಗಾಯ ಪಡಿಸಿರುತ್ತಾನೆ. ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಮೊಟಾರ್
ಸೈಕಲ್ ಕಳುವುಃ- ಕಾಗಿನೆಲೆ ಪೊಲೀಸ್ ಠಾಣೆ ಹದ್ದಿ ಪೈಕಿ ತಿಮಕಾಫೂರ ಗ್ರಾಮದ ಪಿರ್ಯಾದಿ ಶಂಕರಗೌಡ
ಮರಿಗೌಡ ಪಾಟೀಲ ಇವರು ತಮ್ಮ ಮನೆಯ ಮುಂದೆ ರಸ್ತೆಯ ಮೇಲೆ ಪ್ರತಿ ದಿವಸದಂತೆ ಇಟ್ಟ ತನ್ನ ಮೋಟಾರ್ ಸೈಕಲ್ಲ ನಂ ಕೆಎ:27/ಎಸ್-359 ಅ ಕಿ 25.000/- ಸಾವಿರ ನೇದ್ದನ್ನು ದಿನಾಂಕ:29-11-2016 ರಂದು ರಾತ್ರಿ 12:00 ಗಂಟೆಯಿಂದ ದಿನಾಂಕ:30-11-2016 ರ ಬೆಳ್ಳಗ್ಗನ 06:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತ ವರದಿ ನೀಡಿದ್ದು ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ