ಬುಧವಾರ, ಸೆಪ್ಟೆಂಬರ್ 14, 2016

Haveri Dist. Crime news on Sep 10, 2016



f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 10-09-2016
C¥ÀgÁzsÀUÀ¼À ¸ÀÄ¢Ý.

ರಸ್ತೆ ಅಪಘಾತ ಸಾವುಃ- ದಿನಾಂಕ:-10-09-2016 ರಂದು ಸಂಜೆ:07-45 ಘಂಟೆಯ ಸುಮಾರಿಗೆ ಅಕ್ಕಿ-ಆಲೂರ ಕಲ್ಲಾಪೂರ ರಸ್ತೆಯ ಮೇಲೆ ಅಬ್ದುಲ್ಘನಿ ಶೀಡೇನೂರ ಇವರ ಗ್ಯಾರೇಜ್ ಹತ್ತಿರ ಮೃತ ಮಾರುತಿ ಇವನು ತನ್ನ ಮೋಟಾರ್ ಸೈಕಲ್ ನಂಬರ್ ಕೆಎ-17/ಯು-7406 ನೇದ್ದರಲ್ಲಿ ಹಿಂದೆ ಘಾಯಾಳುಗಳಾದ ವಿನಾಯಕ ದೊಡ್ಡಮನಿ ಮತ್ತು ಮಂಜುನಾಥ ರೊಡ್ಡನವರ ಇವರಿಗೆ ಕೂಡಿಸಿಕೊಂಡು ಅಕ್ಕಿಆಲೂರ ನಿಂದ ಕಲ್ಲಾಪೂರ ಕಡೆಗೆ ನಮೂತ ಸ್ಥಳದಲ್ಲಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಅಬ್ದುಲ್ಘನಿ ಶೀಡೇನೂರ ಇವರ ಗ್ಯಾರೇಜ್ ಕಡೆಯಿಂದ ಗೂಡ್ಸ್ ಲಾರಿ ನಂಬರ್ ಕೆಎ-09/1759 ನೇದ್ದರ ಚಾಲಕನು ತನ್ನ ಲಾರಿಯನ್ನು ಹಿಂದೆ ಬರುತ್ತಿದ್ದ ವಾಹನವನ್ನು ಗಮನಿಸದೇ ಒಮ್ಮೇಲೆ ಹಿಂದಕ್ಕೆ ನಿರ್ಲಕ್ಷ್ಯತನದಿಂದ ಮತ್ತು ಮಾನವೀಯ ಪ್ರಾಣಕ್ಕೆ ಹಾನಿಯಾಗುವಂತೆ ನಡೆಯಿಸಿಕೊಂಡು ಬಂದು ರಸ್ತೆಯಲ್ಲಿ ಹೋಗುತ್ತಿದ್ದ ಮೋಟಾರ್ ಸೈಕಲ್ಲಗೆ ಡಿಕ್ಕಿ ಪಡಿಸಿದ್ದಲ್ಲದೇ ಸದರಿ ಮೋಟಾರ್ ಸೈಕಲ್ಲ ಸವಾರನಿಗೆ ಹಣೆಗೆ,ತಲೆಗೆ ಭಾರಿ ಸ್ವರೂಪದ ಘಾಯಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ಮೋಟಾರ್ ಸೈಕಲ್ಲನ ಹಿಂದೆ ಕುಳಿತ ಘಾಯಾಳುವಾದ ಮಂಜುನಾಥ ಇವನಿಗೆ ತಲೆಗೆ,ಎದೆಗೆ ಮುಖಕ್ಕೆ ಭಾರಿ ಸ್ವರೂಪದ ಗಾಯ ಪಡಿಸಿದ್ದಲ್ಲದೇ ಮತ್ತೊಬ್ಬ ಘಾಯಾಳುವಾದ ವಿನಾಯಕ ಇವನಿಗೆ ಬಲಗಾಲ ಪಾದದ ಹತ್ತಿರ ಬಲಗಣ್ಣಿನ ಹತ್ತಿರ ಘಾಯ ಪಡಿಸಿದ್ದಲ್ಲದೇ  ಗೂಡ್ಸ್ ಲಾರಿ ಚಾಲಕನು ಅಪಘಾತವಾದ ವಿಷಯವನ್ನು ಹತ್ತಿರದ ಠಾಣೆಗೂ ತಿಳಿಸದೇ ಮತ್ತು ಗಾಯಾಳುಗಳನ್ನು ಉಪಚರಿಸದೇ ಸ್ಥಳದಲ್ಲಿ ಗೂಡ್ಸ್ ಲಾರಿಯನ್ನು ಬಿಟ್ಟು ಓಡಿ  ಹೋದ ಅಪರಾಧ.
ರಸ್ತೆ ಅಪಘಾತ ಗಾಯಃ- ದಿನಾಂಕ 06-09-2016 ರಂದು  ಮುಂಜಾನೆ 11-15 ಗಂಟೆಯಿಂದ 11-30 ಗಂಟೆಯ ನಡುವಿನ ಅವದಿಯಲ್ಲಿ ಕೋಡ ಗ್ರಾಮದ ಮಾರುತಿ ಕಾಲೇಜ್ ಹತ್ತಿರ ಕೋಡ-ಹಂಸಬಾವಿ ರಸ್ತೆಯ ಮೇಲೆ ಆರೋಪಿಯು ತಾನು ನಡೆಸುತ್ತಿದ್ದ ಆಟೋ ನಂ: ಕೆಎ-27- ಬಿ-6301  ನೇದ್ದರಲ್ಲಿ ಪಿರ್ಯಾದಿ ಹಾಗೂ 1)ಮೇಘಾ ತಂದೆ ನಾಗಪ್ಪ ಬೋಗಾವಿ 2)ಚಿನ್ನವ್ವ ಕೋಂ ಚಂದ್ರಪ್ಪ ಅರಸನಾಳ 3)ಶಿವಪ್ಪ ತಂದೆ ಕರಿಯಪ್ಪ ಕಾಯಕದ 4) ಚಂದ್ರಪ್ಪ ತಂದೆ ಬಸಪ್ಪ ಉತ್ತರಾಣಿಹಳ್ಳಿ 5)ಬಸವರಾಜ ತಂದೆ ಅಂದಾನೆಪ್ಪ ಕೊಟ್ಟೂರ 6)ಕುಮಾರ ತಂದೆ ಮಲ್ಲೇಶಪ್ಪ ಹೊಸಮನಿ @ ಹರಿಜನ 7)ಶೋಬಾ ಕೋಂ ನಾಗಪ್ಪ ಬೋಗಾವಿ 8)ಅಮುಲ್ಯ ತಂದೆ ನಾಗಪ್ಪ ಬೋಗಾವಿ ಸಾ: ಎಲ್ಲರೂ ಸುತ್ತಕೋಟೆ ಇವರನ್ನು ಹತ್ತಿಸಿಕೊಂಡು ಸುತ್ತಕೋಟೆ ಕಡೆಯಿಂದ ಕೋಡ ಕಡೆಗೆ ಅತೀ ಜೊರಿನಿಂದ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ತಾನು ನಡೆಸುತ್ತಿದ್ದ ಆಟೋವನ್ನು ನಿಯಂತ್ರಿಸಲಾಗದೆ ಪಲ್ಟಿ ಮಾಡಿ ಆಟೋದಲ್ಲಿದ್ದವರಿಗೆ ಮೈ ಕೈ ಗೆ ಸಾದಾ ಬಾರಿ ಗಾಯಪಡಿಸಿದ್ದು ಅಲ್ಲದೆ ತನ್ನ ಆಟೋವನ್ನು ಬಿಟ್ಟು ಓಡಿ ಹೋದ ಅಪರಾಧ.
ಇಸ್ಪೇಟ್ ಜೂಜಾಟ ವ್ಯಾಕ್ತಿಗಳ ಬಂಧನಃ- ದಿನಾಂಕ 10-09-2016 ರಂದು ಸಾಯಂಕಾಲ 5:10 ಗಂಟೆಗೆ ಗಣಜೂರ ರೈಲ್ವೆ ಗೇಟ ಸಮೀಪ ಹಳಿಯ ಪಕ್ಕದ ಸಾರ್ವಜನಿಕ ಕಚ್ಚಾ ರಸ್ತೆಯ ಮೇಲೆ 1) ಅಜ್ಮತ್ ಇಬ್ರಾಹಿಂಸಾಬ ಮುಲ್ಲಾ ( 1) / ಮುಸ್ಲಿಂ ವಯಾ 32 ವರ್ಷ 2) ಫಕ್ರುಸಾಬ ಹುಸೇನ್ ಸಾಬ ಮಾದಳ್ಳಿಕರ ( 2) / ಮುಸ್ಲಿಂ ವಯಾ 40 ವರ್ಷ 3) ಸೋಮೇಶ್ ಕಲ್ಲಪ್ಪ ಬಬಲೇಶ್ವರ ( 3) / ಲಿಂಗಾಯಿತ ವಯಾ 26 ವರ್ಷ 4) ಸುರೇಶ್ ಚಂದ್ರಕಾಂತ ಸ್ವಾದಿ ( 4) ವಯಾ 44 ವರ್ಷ ಎಲ್ಲರು ನಾಗೇಂದ್ರಮಟ್ಟಿ, ಹಾಲನಕೆರಿ ಹತ್ತಿರ ಹಾವೇರಿ. ತಮ್ಮ ತಮ್ಮ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಅನ್ನುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕ ಅಪರಾಧ.
 ಮಹಿಳೆ ಮಾನಭಂಗಃ- ಕಾಗಿನೆಲೆ ಪೊಲೀಸ್ ಠಾಣಾ ಹದ್ದಿ ಪೈಕಿ ಕೆರಡವಿ ಗ್ರಾಮದ ಇದರಲ್ಲಿಯ ಪಿರ್ಯಾದಿಯ ಹೋಲದ ಹತ್ತಿರ ರಸ್ತೆಯ ಮೇಲೆ ದಿವಸ ದಿನಾಂಕ:10/09/2016 ರಂದು 14-30 ಗಂಟೆಗೆ ಪಿರ್ಯಾದಿ ಪರಮೇಶಪ್ಪ ಹನುಮಂತಪ್ಪ ಸಂಕಮ್ಮನವರ ( 1) ಸಾ||ಕೆರವಡಿ, ತಾ||ಬ್ಯಾಡಗಿ, ಹಾವೇರಿ. ಮತ್ತು ಅವಳ ತಾಯಿ ಇಬ್ಬರೂ ಬರುತ್ತಿದ್ದಾಗ ನಮೂದ ಮಾಡಿದ ಆರೋಪಿತನು ತನ್ನ ಮತ್ತು ಪಿರ್ಯಾದಿಯ ಗಂಡನ ಹೆಸರಿನಲ್ಲಿದ್ದ ಹೋಲದ ಹಿಸ್ಸೆ ಸಂಬಂದ ತಂಟೆಯಾಗಿ ಬ್ಯಾಡಗಿ ನ್ಯಾಯಾಲಯದಲ್ಲಿ ಪಿರ್ಯಾದುದಾರು ದಾವಾ ಹಾಕಿದ್ದರಿಂದ ಅದರ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಹೋಗುತ್ತಿದ್ದವರಿಗೆ ಅಡ್ಡಗಟ್ಟಿ ತರುಬಿ ಪಿರ್ಯಾದಿಯೊಂದಿಗೆ ತಂಟೆ ತೆಗೆದು ಅವಳಿಗೆ ಹಿಡಿದು ಎಳೆದಾಡಿ ಕೈಯಿಂದ ಮೈ-ಕೈಗೆ ಹೊಡೆದು ಅವಳ ಸೀರೆಯನ್ನು ಎಳೆದು ಅವಮಾನ ಗೊಳಿಸಿದ್ದು ಅಲ್ಲದೆ ಜಗಳ ಬಿಡಿಸಲು ಹೋದ ಅವಳ ತಾಯಿಗೂ ಕೈಯಿಂದ ಮೈ-ಕೈಗೆ ಹೊಡೆದು ಹೋಗುವಾಗ ಅವಾಚ್ಯ ಬೈದು ಜೀವನ ಬೆದರಿಕೆ ಹಾಕಿರುವ ಅಪರಾಧ.
 ಅಕ್ರಮ ಮರುಳು ಗಣಿಗಾರಿಕೆಃ- ದಿನಾಂಕ: 10-09-2016 ರಂದು ಬೆಳಿಗ್ಗೆ 7-45 ಗಂಟೆಗೆ   ಟಾಟಾ ಲಾರಿ ನಂ: KA-27/B-317 ನೇದ್ದರ ಚಾಲಕರು ಹರನಗಿರಿ ಗ್ರಾಮದ ತುಂಗಭದ್ರಾ ನದಿಪಾತ್ರದಲ್ಲಿಂದ ಸರಕಾರದ ಖನಿಜ ಸ್ವತ್ತಾದ ಮರಳನ್ನು ಅಕ್ರಮ ಮರಳು ಗಣಿಕಾರಿಕೆ ಮಾಡಿ ||ಕಿ|| 5400/ರೂ ಕಿಮ್ಮತ್ತಿನ ಅಂದಾಜು 06 ಕ್ಯೂಬಿಕ್ ಮೀಟರ ಮರಳನ್ನು ತಮ್ಮ ಬಾಬಾತ್ ಟಾಟಾ ಲಾರಿ ನಂ: KA-27/B-317 ನೇದ್ದರಲ್ಲಿ ತುಂಬಿಕೊಂಡು ಯಾವುದೇ ಪಸ್ ಪರ್ಮಿಟ್ ಇಲ್ಲದೆ ಸಾಗಾಣಿಕೆ ಮಾಡುತ್ತಿರುವ ಕಾಲಕ್ಕೆ ದಾಳಿ ಮಾಡಿದಾಗ ಆರೋಪಿ ಚಾಲಕನು ಕೈಗೆ ಸಿಗದೇ ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಇರುತ್ತದೆ.
 ಉರುಲು ಹಾಕಿಕೊಂಡು ಯುವತಿ ಆತ್ಮಹತ್ಯೆಃ- ರಟ್ಟಿಹಳ್ಳಿ ಪೊಲೀಸ್ ಠಾಣೆಯ ಹದ್ದಿ ಪೈಕಿ ರಟ್ಟಿಹಳ್ಳಿ  ಗ್ರಾಮದಲ್ಲಿರುವ ಮೃತಳ ಅಜ್ಜ ಅಜ್ಜಿಯ ಮನೆಯಲ್ಲಿ ಮೃತ ಕುಃ-ಭವಾನಿ ತಂದೆ ಅಣ್ಣೋಜಿರಾವ್ ಚವ್ಹಾಣ ವಯಾ 17 ವರ್ಷ ಸಾ||ಕಣವಿ ಬಿಳಚಿ ಹಾಲಿ ವಾಸ ರಟ್ಟಿಹಳ್ಳ ಇವಳು ತನ್ನ ತಂದೆಯು ಕಟ್ಟುತ್ತಿರುವ ಮನೆಯು ಅರ್ದಕ್ಕೆ ನಿಂತುಹೊಗಿದ್ದು ಅಲ್ಲದೆ ಮನೆಯ ಪರಿಸ್ಥಿತಿಯು ಸ್ವಲ್ಪ ತ್ರಾಸ ಆಗಿದ್ದು ಅಲ್ಲದೆ ತನ್ನ ತಂದೆಗೆ ನಾವು 3 ಜನ ಹೆಣ್ಣುಮಕ್ಕಳು ಇದ್ದೇವೆ ಮನೆಯ ಪರಿಸ್ಥಿತಿಯು ಬಿಗಡಾಯಿಸಿದೆ 3 ಜನ ಹೆಣ್ಣು ಮಕ್ಕಳಿಗೆ ತನ್ನ ತಂದೆ ತಾಯಿ ಹೇಗೆ ಮದುವೆ ಮಾಡುತ್ತಾರೆ ತಮಗೆ ಒಂದು ಸ್ವಲ್ಪನು ಜಮೀನು ಇಲ್ಲಾ ತಮ್ಮ ತಂದೆ ಒಬ್ಬರೆ ದುಡಿಯಬೇಕು ಅಂತಹದ್ದರಲ್ಲಿ ತನಗೆ ಮದುವೆ ಮಾಡಲು ವರಗಳನ್ನು ತೋರಿಸುತ್ತಿದ್ದಾರಲ್ಲಾ ತನ್ನ ಮದುವೆಯನ್ನು ಹೇಗೆ ಮಾಡುತ್ತಾರೆ ಮತ್ತು ತನ್ನ ತಂಗಿಯರ ಮದುವೆಯನ್ನು ಹೇಗೆ ಮಾಡುತ್ತಾರೆ ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೇ ದಿನಾಂಕಃ-09-09-2016 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ತನ್ನ ಅಜ್ಜಿಯೊಂದಿಗೆ ಊಟ ಮಾಡಿ ನಂತರ ಮಲಗಲು ಅಂತಾ ಕೋಣೆಗೆ ಹೋಗಿ ದಿನಾಂಕಃ-10-09-2016 ರಂದು ಬೆಳಗಿನ ಜಾವ 5-00 ಗಂಟೆ ನಡುವಿನ ಅವಧಿಯಲ್ಲಿ ತನ್ನ ವೇಲನ್ನು ಕೊಣೆಯ ಅಡ್ಡ ಬೆಲಗಿಗೆ ಕಟ್ಟಿಕೊಂಡು ಕುತ್ತಿಗೆಗೆ ವೇಲಿನಿಂದ ಉರಲು ಹಾಕಿಕೊಂಡು ಸತ್ತಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾಅಂತಾ ವರದಿಯಲ್ಲಿ ನಮೂದ ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ