f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 16-09-2016
C¥ÀgÁzsÀUÀ¼À ¸ÀÄ¢Ý.
ರಸ್ತೆ ಅಪಘಾತ ಸಾವುಃ- ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:16-09-2016
ರಂದು ಬೆಳಗಿನ ಜಾವ 01:15 ಗಂಟೆಯ ವೇಳೆಯಲ್ಲಿ ಹಾವೇರಿ ಯಿಂದ ಹಾನಗಲ್ಲ ಗೆ ಹೋಗುವ ರಸ್ತೆಯ ಹತ್ತಿರ
ಇರುವ ರಾ.ಹೆ-4 ರ ಬೈಪಾಸ್ ರಸ್ತೆಯಲ್ಲಿ ಎನ್.ಡಬ್ಲೂ.ಕೆ.ಆರ್.ಟಿ.ಸಿ ಇಲಾಖೆಯ ಕರೋನಾ ಎ/ಸಿ ಸ್ಲೀಪರ್ ಬಸ್ ನಂ ಕೆಎ-22/ಎಫ್-2068 ನೇದ್ದರ ಚಾಲಕನು ತನ್ನ ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹುಬ್ಬಳ್ಳಿ ಕಡೆಯಿಂದ ಬೆಂಗಳೂರ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷ್ಯ ತಾತ್ಸರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ಹಾವೇರಿ ಎನ್.ಹೆಚ್-04 ಬೈಪಾಸ್ ಹಾನಗಲ್ ಬ್ರಿಡ್ಜ ದಾಟಿದ ನಂತರ ಒಮ್ಮೇಲೆ ಎಡಕ್ಕೆ ಕಟ್ ಮಾಡಿ ರಸ್ತೆಯ ಸೈಡಿಗೆ ಬೆಂಗಳೂರ ಕಡೆಗೆ ಮುಖವಾಗಿ ನಿಂತ ಲಾರಿ ನಂ ಕೆಎ-01/ಎಎ-2635 ನೇದ್ದರ ಹಿಂದಿನ ಬಲಭಾಗಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕ ಎಂ.ಬಿ.ಪಾಟೀಲ್ ಸಾ|| ಮಹಾಂತೇಶ ನಗರ ಬೆಳಗಾವಿ ಈತನು ಬಸ್ಸಿನ ಎಡಗಡೆ ತಗಡು ಕಟ್ಟಾಗಿ ತಲೆ ಹಚ್ಚಿ ರಸ್ತೆಗೆ ಬಿದ್ದು, ತಲೆಗೆ ಗಂಭೀರ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮರಣ ಹೊಂದಿದ್ದು, ಅಲ್ಲದೇ, ಇನ್ನೂ ಕೆಲವು ಪ್ರಯಾಣಿಕರಿಗೆ ಸಾದಾ ವ ಭಾರೀ ದುಃಖಾಪತ್ತಪಡಿಸಿದ್ದು ಅಲ್ಲದೇ ಬಸ್ ಮತ್ತು ಲಾರಿಗೆ ಜಖಂಗೊಳಿಸಿದ ಅಪರಾಧ.
ರಸ್ತೆ ಅಪಘಾತ ಗಾಯಃ- ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:16-09-2016 ರಂದು ಬೆಳಗಿನ
ಜಾವ 03:45 ಗಂಟೆಯ ವೇಳೆಯಲ್ಲಿ ಹಾವೇರಿ ಯಿಂದ ಹಾನಗಲ್ಲ ಗೆ ಹೋಗುವ ರಸ್ತೆಯ ಹತ್ತಿರ ಇರುವ ರಾ.ಹೆ-4
ರ ಬೈಪಾಸ್ ರಸ್ತೆಯಲ್ಲಿ ಲಾರಿ ನಂ ಕೆಎ-01/ಎಎ-2953 ನೇದ್ದರ ಚಾಲಕನು ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಬೆಂಗಳೂರ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷ್ಯ ತಾತ್ಸರತನದಿಂದ ಓಡಿಸಿಕೊಂಡು ಬಂದು ಹಾವೇರಿ ಎನ್ ಹೆಚ್-04 ಬೈಪಾಸ್ ಹಾನಗಲ್ ರೋಡ ಬ್ರಿಡ್ಜ ದಾಟಿದ ನಂತರ ತನ್ನ ಮುಂದೆ ಹೋಗುತ್ತಿದ್ದ ಟೆಂಪೋ ಟ್ರ್ಯಾವೆಲ್ಲರ್ ನಂ ಎಂ.ಹೆಚ್-09/ಸಿವಿ-0609 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಟೆಂಪೋ ಟ್ರ್ಯಾವೇಲ್ಲರನ್ನು ಸರ್ವೀಸ್ ರಸ್ತೆಗೆ ಕೆಡವಿ ಗಾಡಿಯಲ್ಲಿದ್ದ ಪಿರ್ಯಾದಿ ಹಾಗೂ ಇನ್ನೂ 14 ಜನರಿಗೆ ಸಾದಾ ಗಾಯಪಡಿಸಿ, ಟೆಂಪೋ ಟ್ರ್ಯಾವೆಲ್ಲರಿಗೆ ಜಖಂಗೊಳಿಸಿ, ಗಾಯಾಳುಗಳ ಉಪಚಾರಕ್ಕೆ ಸಹಕರಿಸದೇ ಸಂಗತಿಯನ್ನು ಠಾಣೆಗೆ ತಿಳಿಸದೇ ಲಾರಿ ಸಮೇತ ಪರಾರಿಯಾದ ಅಪರಾಧ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ